ಈ ಹಿಂದೆ ಕಲಬುರ್ಗಿ– ಬೀದರ್ ರೈಲು ಮಾರ್ಗವನ್ನು ಲೋಕಾರ್ಪಣೆ ಮಾಡುವಾಗಲೂ ಸ್ಥಳೀಯ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಮಂತ್ರಿಸದೇ ಅವಮಾನಿಸಲಾಗಿತ್ತು. ಪ್ರಧಾನಿ ವಾಕ್ಚಾತುರ್ಯದಲ್ಲಿ ತಮ್ಮ ಈ ನಡವಳಿಕೆಯನ್ನು ಸಮರ್ಥಿಸಿಕೊಳ್ಳಬಹುದು. ಆದರೆ, ಅವರ ಈ ನಡವಳಿಕೆ ಮುಂದಿನ ದಿನಗಳಲ್ಲಿ ದೇಶದ ಒಕ್ಕೂಟ ವ್ಯವಸ್ಥೆಯ ಪರಿಕಲ್ಪನೆ ಬಗ್ಗೆ ಮರುಚಿಂತನೆ ಮಾಡುವಂತೆ ಮಾಡಬಹುದು. ಪ್ರತಿಯೊಂದರಲ್ಲೂ ‘ರಾಜಕೀಯ’ ಮಾಡುವ ಈ ಪ್ರವೃತ್ತಿ ದೇಶದ ಒಟ್ಟಾರೆ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಎಲ್ಲರನ್ನೂ ಕೂಡಿಕೊಂಡು ಹೋಗಬೇಕೆನ್ನುವ ಅವರ ಮಾತು ಮತ್ತು ಕೃತಿಯಲ್ಲಿ ಭಾರಿ ವ್ಯತ್ಯಾಸ ಕಾಣುತ್ತದೆ.