ಕೆಲವೆಡೆ ನಗರ ಪ್ರದೇಶಗಳಲ್ಲಷ್ಟೇ ರಸ್ತೆಗಳನ್ನು ಅಭಿವೃದ್ಧಿಪಡಿಸಿ, ಹಳ್ಳಿಗಳು ಹಾಗೂ ನಗರಗಳು ಕೂಡುವ ರಸ್ತೆಗಳನ್ನು ಹಾಗೆಯೇ ಬಿಡಲಾಗಿದೆ. ಇದರಿಂದ ಹಳ್ಳಿಗರ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ. ಹಳ್ಳಿಗಳಲ್ಲಿ ವಾಸ ಮಾಡುತ್ತಿರುವವರು ಇಂದಿಗೂ ಎಲ್ಲದಕ್ಕೂ ನಗರ–ಪಟ್ಟಣಗಳನ್ನೇ ಅವಲಂಬಿಸಿದ್ದಾರೆ. ಸರಕು, ಹಣ್ಣು, ತರಕಾರಿ ಎಲ್ಲವನ್ನೂ ನಗರಗಳಿಗೆ ಸಾಗಿಸುತ್ತಾರೆ. ಹಳ್ಳಿಗಳಿಂದ ನಗರಗಳ ಶಾಲಾ ಕಾಲೇಜುಗಳಿಗೆ ಸಂಚರಿಸುವ ವಿದ್ಯಾರ್ಥಿಗಳಿಗೂ ತೊಂದರೆಯಾಗುತ್ತಿದೆ. ರೋಗಿಗಳನ್ನು ಆಸ್ಪತ್ರೆಗಳಿಗೆ ಸಾಗಿಸಬೇಕಾದರೂ ಪರದಾಡುವ ಪರಿಸ್ಥಿತಿ ಇದೆ.