ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಅಗ್ನಿಪಥ್ ಯೋಜನೆ ಸ್ವಾಗತಾರ್ಹವಾಗಿದೆ. ಈ ಯೋಜನೆಯ ಮೂಲಕ ಯುವಜನರಿಗೆ 4 ವರ್ಷದ ಅವಧಿಗೆ ಸೇನೆಯ ತ್ರಿವಿಧ ದಳಗಳಲ್ಲಿ ಸೇವೆ ಮಾಡಲು ಅವಕಾಶ ಸಿಗಲಿದೆ. ಗರಿಷ್ಠ 45 ಸಾವಿರ ಯುವಜನರನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಈ ಯೋಜನೆಯು ಉದ್ಯೋಗಾವಕಾಶ ನೀಡುವುದರ ಜೊತೆಗೆ ದೇಶದ ರಕ್ಷಣಾ ಸೇವೆ ಮಾಡಬೇಕೆಂಬ ಯುವಜನರ ಆಸೆಯನ್ನೂ ಈಡೇರಿಸಲಿದೆ.