ಬಸವಣ್ಣನವರ ದೃಷ್ಟಿಯಲ್ಲಿ ಜಾತಿವ್ಯವಸ್ಥೆಯು ದುಡಿಯುವ ವರ್ಗದ ಜನಸಮುದಾಯವನ್ನು ಅನ್ನ, ಬಟ್ಟೆ, ವಸತಿ, ವಿದ್ಯೆ, ಆರೋಗ್ಯದಿಂದ ವಂಚಿತರನ್ನಾಗಿ ಮಾಡಿ, ಹಸಿವು ಬಡತನ ಮತ್ತು ಅಪಮಾನದಿಂದ ನರಳುವುದಕ್ಕೆ ಕಾರಣವಾದ ಕ್ರೂರ ವ್ಯವಸ್ಥೆಯಾಗಿತ್ತು. ಆದ್ದರಿಂದಲೇ ‘ಎಲ್ಲ ಮಾನವರು ಒಂದೇ’ ಎಂಬ ಸಂದೇಶವನ್ನು ಸಾರುವುದಕ್ಕಾಗಿ ಮತ್ತು ಜಾತಿ ವ್ಯವಸ್ಥೆಯ ಬೇರನ್ನು ಅಲುಗಿಸಿ ಸಡಿಲಿಸುವುದರ ಸಂಕೇತವಾಗಿ ಜಾತಿ ಮೇಲರಿಮೆಯ ಸಂಪ್ರದಾಯದಂತೆ ತಮಗೆ ತೊಡಿಸಿದ್ದ ಜನಿವಾರವನ್ನು ಕಿತ್ತುಹಾಕಿ ಹೋದರು.ಉಪನಯನ ಆಗಿ ಹೋದರು ಎಂಬ ನುಡಿಗಳು ಮೇಲಿನ ಎಲ್ಲಾ ಸಂಗತಿಗಳನ್ನು ಮರೆ ಮಾಚುತ್ತವೆ.