ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಅಧಿವೇಶನಕ್ಕಿಂತ ಪ್ರತಿಭಟನೆಗಳದೇ ಕಾವು!

ಅಕ್ಷರ ಗಾತ್ರ

ಬೆಳಗಾವಿಯಲ್ಲಿ ನಡೆದಿರುವ ವಿಧಾನಮಂಡಲದ ಅಧಿವೇಶನದಲ್ಲಿ ಸದನದಲ್ಲಿ ಖಾಲಿ ಖುರ್ಚಿಗಳನ್ನು ನೋಡಿದಾಗ, ಇಂತಹ ಅಧಿವೇಶನದ ಅಗತ್ಯವಿತ್ತೇ ಮತ್ತು ಈ ರೀತಿ ತೆರಿಗೆದಾರನ ಹಣವನ್ನು ಪೋಲು ಮಾಡಬಹುದೇ ಎನ್ನಿಸದಿರದು. ಶಾಸಕರ ಅದರಲ್ಲೂ ಮುಖ್ಯವಾಗಿ ರಾಜ್ಯದ ಉತ್ತರ ಭಾಗದ ಶಾಸಕರಲ್ಲೂ ಅಂತಹ ಉತ್ಸಾಹ ಕಾಣದಿರುವಾಗ ಇಂತಹ ಪ್ರಯತ್ನ ಬೇಕಿತ್ತೇ? ಈ ರೀತಿ ಕಾಟಾಚಾರದ ಅಧಿವೇಶನ ನಡೆಸುವ ಬದಲು ಬೆಂಗಳೂರಿನ ವಿಧಾನಸೌಧದಿಂದ ಈಗಾಗಲೇ ನಿರ್ಧರಿಸಿರುವ ಕಚೇರಿಗಳನ್ನಾದರೂ ಬೆಳಗಾವಿಗೆ ಸ್ಥಳಾಂತರಿಸುವ ಕೆಲಸ ಮಾಡಬಹುದಿತ್ತು. ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಈ ಅಧಿವೇಶನದಲ್ಲಿ ಉತ್ತರ ಸಿಗುತ್ತದೆ ಎನ್ನುವ ನಿರೀಕ್ಷೆಯೂ ಹುಸಿಯಾಗುತ್ತಿದೆ. ಅಧಿವೇಶನಕ್ಕಿಂತ ಹೆಚ್ಚಾಗಿ ಸುವರ್ಣಸೌಧದ ಮುಂದೆ ನಡೆಯುವ ಪ್ರತಿಭಟನೆಗಳ ಕಾವು ಹೆಚ್ಚಾಗಿ ಕಾಣುತ್ತಿದೆ.

ರಮಾನಂದ ಶರ್ಮಾ,ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT