ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಅಧಿವೇಶನಕ್ಕಿಂತ ಪ್ರತಿಭಟನೆಗಳದೇ ಕಾವು!

ಅಕ್ಷರ ಗಾತ್ರ

ಬೆಳಗಾವಿಯಲ್ಲಿ ನಡೆದಿರುವ ವಿಧಾನಮಂಡಲದ ಅಧಿವೇಶನದಲ್ಲಿ ಸದನದಲ್ಲಿ ಖಾಲಿ ಖುರ್ಚಿಗಳನ್ನು ನೋಡಿದಾಗ, ಇಂತಹ ಅಧಿವೇಶನದ ಅಗತ್ಯವಿತ್ತೇ ಮತ್ತು ಈ ರೀತಿ ತೆರಿಗೆದಾರನ ಹಣವನ್ನು ಪೋಲು ಮಾಡಬಹುದೇ ಎನ್ನಿಸದಿರದು. ಶಾಸಕರ ಅದರಲ್ಲೂ ಮುಖ್ಯವಾಗಿ ರಾಜ್ಯದ ಉತ್ತರ ಭಾಗದ ಶಾಸಕರಲ್ಲೂ ಅಂತಹ ಉತ್ಸಾಹ ಕಾಣದಿರುವಾಗ ಇಂತಹ ಪ್ರಯತ್ನ ಬೇಕಿತ್ತೇ? ಈ ರೀತಿ ಕಾಟಾಚಾರದ ಅಧಿವೇಶನ ನಡೆಸುವ ಬದಲು ಬೆಂಗಳೂರಿನ ವಿಧಾನಸೌಧದಿಂದ ಈಗಾಗಲೇ ನಿರ್ಧರಿಸಿರುವ ಕಚೇರಿಗಳನ್ನಾದರೂ ಬೆಳಗಾವಿಗೆ ಸ್ಥಳಾಂತರಿಸುವ ಕೆಲಸ ಮಾಡಬಹುದಿತ್ತು. ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಈ ಅಧಿವೇಶನದಲ್ಲಿ ಉತ್ತರ ಸಿಗುತ್ತದೆ ಎನ್ನುವ ನಿರೀಕ್ಷೆಯೂ ಹುಸಿಯಾಗುತ್ತಿದೆ. ಅಧಿವೇಶನಕ್ಕಿಂತ ಹೆಚ್ಚಾಗಿ ಸುವರ್ಣಸೌಧದ ಮುಂದೆ ನಡೆಯುವ ಪ್ರತಿಭಟನೆಗಳ ಕಾವು ಹೆಚ್ಚಾಗಿ ಕಾಣುತ್ತಿದೆ.

ರಮಾನಂದ ಶರ್ಮಾ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT