ಈ ಬಗೆಯ ಬೆಳವಣಿಗೆಗಳನ್ನು ಮತ್ತು ಜನರ ಧಾರ್ಮಿಕ ಭಾವನೆಗಳನ್ನು ನಮ್ಮ ರಾಜಕೀಯ ಪಕ್ಷಗಳು ಹಾಗೂ ನಾಯಕರು ಸಂಪೂರ್ಣವಾಗಿ ಸ್ವಾರ್ಥಕ್ಕೆ ಬಳಸಿಕೊಳ್ಳುವುದು ಎಲ್ಲರಿಗೂ ಗೊತ್ತಿದೆ. ಹೀಗಿದ್ದರೂ ಪ್ರತಿಭಟನೆಯ ನೆಪದಲ್ಲಿ ಗಲಭೆ, ಅಶಾಂತಿ ಸೃಷ್ಟಿಸಿದರೆ ರಾಜಕೀಯ ಮಾಡುವವರ ಕೈಗೆ ಒಂದು ಅಸ್ತ್ರ ಕೊಟ್ಟಂತಾಗುತ್ತದೆ. ಈ ಕುತಂತ್ರದಿಂದ, ನಮ್ಮ ಪ್ರತಿಭಟನೆಗಳು ನಮ್ಮ ಬೇಡಿಕೆ ಈಡೇರಿಸುವ ಬದಲು, ಗಲಭೆ, ಅಶಾಂತಿಯ ರೂಪ ಪಡೆದು ನಮ್ಮ ಹಾಗೂ ನಮ್ಮ ಅವಲಂಬಿತರ ಅತ್ಯಮೂಲ್ಯ ಜೀವನವನ್ನು ನರಕವಾಗಿಸುವುದಂತೂ ನಿಜ.