ಕಳೆದ ಐದು ಹಣಕಾಸು ವರ್ಷಗಳಲ್ಲಿ ಬ್ಯಾಂಕುಗಳು ಒಟ್ಟು ₹ 9.91 ಲಕ್ಷ ಕೋಟಿ ಮೊತ್ತದ ಸಾಲವನ್ನು ‘ರೈಟ್ಆಫ್’ ಮಾಡಿವೆ ಎಂದು ಕೇಂದ್ರ ಸರ್ಕಾರವು ಸಂಸತ್ತಿಗೆ ಮಾಹಿತಿ ನೀಡಿದೆ ಎಂದು ವರದಿಯಾಗಿದೆ. ಈ ವರದಿ ಓದಿದೊಡನೆ ದಿಗ್ಭ್ರಮೆಯಾಯಿತು. ಸಾಲ ಕೊಟ್ಟ ನಂತರ ಅದನ್ನು ವಸೂಲು ಮಾಡುವುದು ಬ್ಯಾಂಕಿನ ಆದ್ಯ ಕರ್ತವ್ಯಲ್ಲವೇ? ಸಣ್ಣ ಮನೆ ಕಟ್ಟಿಕೊಳ್ಳಲು ಸಾಲ ಪಡೆಯಲು ಬ್ಯಾಂಕ್ಗೆ ಹೋದಾಗ ಯಾಕಾದರೂ ಸಾಲಕ್ಕೆ ಬಂದೆವೋ ಎಂಬಷ್ಟು ನಿಯಮಗಳು ನಿಮ್ಮೆದುರು ತೆರೆದುಕೊಳ್ಳುತ್ತವೆ. ಸಾಲ ಮಾಡಿ ವಾಹನ ಕೊಂಡವರು ಒಂದೆರಡು ಕಂತು ಸಾಲ ಕಟ್ಟದಿದ್ದರೆ ನೋಟಿಸ್ ಮೇಲೆ ನೋಟಿಸ್ ನೀಡಿ ಮನೆಗೇ ಬರುತ್ತಾರೆ. ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಾರೆ. ಮನೆಯ ವಿದ್ಯುತ್ ಬಿಲ್ ಪಾವತಿಸುವಲ್ಲಿ ತಡವಾದರೆ ಸಂಪರ್ಕವನ್ನೇ ಕಡಿಯುತ್ತಾರೆ.