‘ನೆಲದ ಕಾನೂನನ್ನು ಉಲ್ಲಂಘಿಸಲು ಹಾತೊರೆಯುವ ಸರ್ಕಾರ...’ ಶೀರ್ಷಿಕೆಯ ಸಂಪಾದಕೀಯ (ಪ್ರ.ವಾ.,
ಆ. 2) ತುಂಬಾ ಸಾಮಯಿಕ, ಸ್ಪಷ್ಟ ಹಾಗೂ ಅರ್ಥಪೂರ್ಣವಾಗಿದೆ. ‘ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು’ ಎಂಬಂತಹ ಅಥವಾ ‘ಕ್ರಿಯೆ- ಪ್ರತಿಕ್ರಿಯೆ’ ಎಂಬಂತಹ ವೈಚಾರಿಕ ಪಳೆಯುಳಿಕೆ ಇಂದಿನ ಪ್ರಜಾಪ್ರಭುತ್ವದ ಕಾಲದಲ್ಲಿ ಯಾರಿಗೂ ಸಲ್ಲದು; ಉನ್ನತ ಅಧಿಕಾರದಲ್ಲಿರುವವರಿಗಂತೂ ಖಂಡಿತಾ ಸಲ್ಲದ ನಿಲುವು.