ರಾಜ್ಯದ ಗಡಿ ಜಿಲ್ಲೆ ಬೀದರ್ನ ಕೆಲವು ಗ್ರಾಮಗಳ ದುಃಸ್ಥಿತಿ ಕುರಿತ ವರದಿ (ಒಳನೋಟ, ಆ. 1) ಓದಿ ಮನಸಿಗೆ ತುಂಬಾ ನೋವಾಯಿತು. ಈ ಭಾಗದ ಜನರು ಮೂಲಸೌಕರ್ಯಗಳನ್ನು ಪಡೆಯಲು ನ್ಯಾಯಾಲಯದ ಕದ ತಟ್ಟಬೇಕಾಗಿರುವುದು ವಿಪರ್ಯಾಸ.
ಜನರಿಗೆ ಸಾರಿಗೆ, ನೀರು, ವಿದ್ಯುತ್ನಂತಹ ಮೂಲಸೌಕರ್ಯಗಳನ್ನು ಕಲ್ಪಿಸುವುದು ಸರ್ಕಾರದ ಕರ್ತವ್ಯವಲ್ಲವೇ? ಆಡಳಿತ ನಡೆಸುವವರ ಅನುಭವ ಕೊರತೆಯೋ ಅಥವಾ ಅಸಡ್ಡೆಯೋ? ಮೂಲಸೌಕರ್ಯ ಕಲ್ಪಿಸುವ ಕಡೆಗೆ ಇನ್ನಾದರೂ ಸರ್ಕಾರ ಗಮನ ನೀಡಲಿ. ಅನುಷ್ಠಾನದಲ್ಲಿಭ್ರಷ್ಟಾಚಾರ ನುಸುಳದಂತೆ ಎಚ್ಚರ ವಹಿಸಲಿ.