ಈ ಎಲ್ಲಾ ಸಮಸ್ಯೆಗಳ ಮೂಲ ಕಾರಣ ರಾಜಕಾರಣಿಗಳು. ಅಧಿಕಾರಕ್ಕಾಗಿ, ತಮ್ಮ ಪ್ರಾಬಲ್ಯಕ್ಕಾಗಿ ಜನರಲ್ಲಿ ವಿಷಬೀಜ ಬಿತ್ತಿ, ಆತಂಕ ಮೂಡಿಸಲು ಯಾವ ಮಟ್ಟಕ್ಕಾದರೂ ಇಳಿಯಲು ಅವರು ಪಕ್ಷಭೇದವಿಲ್ಲದೆ ಅವಕಾಶವನ್ನು ಹುಡುಕುತ್ತಿರುತ್ತಾರೆ. ಎಲ್ಲಿ ಬೆಂಕಿ ಹಚ್ಚಿದರೆ ತಮ್ಮ ಬೇಳೆ ಬೇಯುತ್ತದೆ ಎಂದು ಕಾಯುತ್ತಿರುತ್ತಾರೆಯೇ ವಿನಾ ಅವರು ಯಾರ ಉದ್ಧಾರವನ್ನೂ ಮಾಡುವುದಿಲ್ಲ. ಕೆಟ್ಟ ರಾಜಕೀಯ ಮಾಡುವವರೇ ಎಲ್ಲೆಡೆ ತುಂಬಿದ್ದಾರೆ.
ಇವರ ನಡುವೆ ಉತ್ತಮ ರಾಜಕಾರಣ ಮಾಡುವವರು ಎಲ್ಲಿದ್ದಾ ರೆಂದು ಹುಡುಕಬೇಕಾಗಿದೆ. ಶತಶತಮಾನಗಳಿಂದ ಅಲ್ಪಸಂಖ್ಯಾತ ಹೆಣ್ಣುಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಸಾಧ್ಯವೇ ಇರಲಿಲ್ಲ. ಕೆಲ ದಶಮಾನಗಳಿಂದೀಚೆಗೆ ಅವರಿಗೆ ಇದು ಸಾಧ್ಯವಾಗುತ್ತಿದೆ. ಆ ಸಮುದಾಯದ ಹೆಣ್ಣು ಮಕ್ಕಳು ಇದನ್ನು ಅರ್ಥಮಾಡಿಕೊಂಡು ಧಾಡಸಿತನದಿಂದ ಮುಂದುವರಿಯಬೇಕಿತ್ತು. ಆದರೆ ಯಾರು ಅವರಿಗೆ ತಿಳಿಹೇಳುವವರು?ವಿಶಾಲಾಕ್ಷಿ ಶರ್ಮಾ,ಬೆಂಗಳೂರು