ಹಳ್ಳಿಯ ಮಕ್ಕಳಲ್ಲಿ ಕೆಲವೊಂದು ವಿಷಯಗಳಲ್ಲಿ ಸಹಜವಾಗಿ ಕೀಳರಿಮೆ ಇರುತ್ತದೆ. ಈ ಬಗ್ಗೆ ಸದಾಶಿವ್ ಸೊರಟೂರು ತಮ್ಮ ಲೇಖನದಲ್ಲಿ ಪ್ರಸ್ತಾಪಿಸಿದ್ದಾರೆ (ಸಂಗತ, ಆ. 3). ಸರಿಯಾದ ರೀತಿಯಲ್ಲಿ ಮಕ್ಕಳಿಗೆ ಮಾರ್ಗದರ್ಶನ ನೀಡಿ, ಅವರ ಕೀಳರಿಮೆಯನ್ನು ಹೋಗಲಾಡಿಸುವ ಗುರುತರ ಜವಾಬ್ದಾರಿ ಶಿಕ್ಷಕರದ್ದು ಮತ್ತು ಪೋಷಕರದ್ದು. ನಗರಗಳ ಬಗ್ಗೆ, ಖಾಸಗಿ ಶಾಲೆಗಳ ವಿಷಯದಲ್ಲಿ ಮತ್ತು ಇಂಗ್ಲಿಷ್ ಮಾಧ್ಯಮ ಹಾಗೂ ಸಿಬಿಎಸ್ಇ, ಐಸಿಎಸ್ಇ ಪಠ್ಯ ಕುರಿತು ಮಕ್ಕಳಲ್ಲಿ ಅಷ್ಟೇ ಏಕೆ, ಪೋಷಕರಲ್ಲೂ ಮನೆ ಮಾಡಿಕೊಂಡಿರುವ ಮೇಲರಿಮೆಯನ್ನು ಕಳಚುವ ಕೆಲಸವನ್ನು ಶಿಕ್ಷಕರು ಮಾಡಬೇಕಿದೆ.