ಮೊರಾರ್ಜಿ ದೇಸಾಯಿ ಅವರು ದೇಶದ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಬೆಳಗಾವಿಗೆ ಭೇಟಿ ನೀಡಿದ್ದರು. ವಿಮಾನ ನಿಲ್ದಾಣದಲ್ಲಿ ಬೆಳಗಾವಿ ಗಡಿ ವಿವಾದದ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದಾಗ ಅವರು ‘ಎಲ್ಲಿದೆ ಸಮಸ್ಯೆ? ಅದು ಮುಗಿದ ಅಧ್ಯಾಯ’ ಎಂದು ಹೇಳುವ ದಿಟ್ಟತನ ಮೆರೆದರು. ಇಂಥದ್ದೇ ಒಂದು ನಿರ್ಧಾರ ಸುಪ್ರಿಂ ಕೋರ್ಟ್ನಿಂದ ಬಂದರೆ ಗಡಿನಾಡಿನ ಜನ ನೆಮ್ಮದಿಯಿಂದ ಬದುಕಬಲ್ಲರು.