ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿರಿಯ ನಾಗರಿಕರಿಗಾಗಿ ಬೇರೆ ಬೇರೆ ರೀತಿಯಲ್ಲಿ ಹಲವು ರಿಯಾಯಿತಿಗಳನ್ನು ನೀಡಿವೆಯಾದರೂ, ಬ್ಯಾಂಕು, ಅಂಚೆ ಕಚೇರಿ ಮತ್ತು ಇತರ ಹಣಕಾಸು ಸಂಸ್ಥೆಗಳಲ್ಲಿ ಅವರು ಇರಿಸಿರುವ ಠೇವಣಿಗೆ ಕೊಡಮಾಡುವ ಬಡ್ಡಿದರವು ಕೆಲವು ವರ್ಷಗಳ ಹಿಂದಿನ ಮಟ್ಟಕ್ಕೆ ಹೋಲಿಸಿದರೆ ಈಗ ತೀರಾ ಕಡಿಮೆ. ಎಷ್ಟೋ ಹಿರಿಯರು ಬಡ್ಡಿ ಹಣದಲ್ಲೇ ಜೀವನ ಸಾಗಿಸುತ್ತಿದ್ದು, ಬೆಲೆ ಏರಿಕೆಯ ಈ ದುಬಾರಿಯ ದಿನಗಳು ಅವರಿಗೆ ಮತ್ತಷ್ಟು ದುಬಾರಿಯಾಗಿವೆ. ಹಾಗಾಗಿ, ಹಿರಿಯರಿಗಾಗಿ ಪ್ರತ್ಯೇಕ ಆಸ್ಪತ್ರೆ, ಆಶ್ರಯ ತಾಣಗಳನ್ನು ಸರ್ಕಾರವು ತೆರೆದರೆ ಅವರ ಬದುಕಿಗೆ ಸ್ವಲ್ಪಮಟ್ಟಿಗಾದರೂ ಆಸರೆ ಸಿಗಬಹುದು.