ಆಳುವ ಹಾಗೂ ಪ್ರತಿಪಕ್ಷಗಳವರು ಅಭ್ಯರ್ಥಿ ಆಯ್ಕೆ ಬಗೆಗಿನ ಕಸರತ್ತು ಆರಂಭಿಸಿದ್ದಾರೆ. ವಿ.ವಿ.ಗಿರಿ, ವೆಂಕಟರಾಮನ್, ಪ್ರಣವ್ ಮುಖರ್ಜಿ ಅಂತಹವರು ಇದ್ದಂತಹ ಈ ಸಾಂವಿಧಾನಿಕ ಪದವಿಗೆ ಯಾರೋ ಒಬ್ಬರನ್ನು ಜಾತಿ, ಅನುಕೂಲಕರ ಸ್ವಭಾವದವರು ಇತ್ಯಾದಿ ಪರಿಗಣನೆಗಳಿಂದ ಸೂಚಿಸಿದರೆ ದೇಶದ ಹಿತ ಕಾಯ್ದಂತೆ ಆಗುವುದಿಲ್ಲ. ‘ಪ್ರಧಾನ ಸೇವಕ’ರ ಕಚೇರಿ ಅತ್ಯಂತ ಬಲಿಷ್ಠವಾಗಿರುವ ದಿನಗಳು ಮುಂದುವರಿಯಲಿವೆ. ಸರ್ಕಾರದ ಕ್ರಮಗಳ ಬಗೆಗೆ ನಿಯೋಗದಲ್ಲಿ ಹೋಗಿ ಮನವಿಪತ್ರ ಸಲ್ಲಿಸಿದರೆ ಪರಿಶೀಲಿಸುವ ಸೌಜನ್ಯವನ್ನಾದರೂ ತೋರಬಲ್ಲ ವ್ಯಕ್ತಿ ಆ ಹುದ್ದೆಯಲ್ಲಿ ಇರಬೇಕಾಗುತ್ತದೆ. ಸರ್ವಾನುಮತದ ಅಭ್ಯರ್ಥಿ ಕೂಡ ತಪ್ಪು ನಿರ್ಧಾರ ಕೈಗೊಂಡ ನಿದರ್ಶನವೂ ಇದೆ. ಒಟ್ಟಿನಲ್ಲಿ ರಾಜಕೀಯ ಪಕ್ಷಗಳು ಈ ವಿಷಯದಲ್ಲಿ ದೂರದೃಷ್ಟಿಯ ನಿಲುವು ತಾಳುವುದು ಅತ್ಯಗತ್ಯ.