ಬದುಕಿನಲ್ಲಿ 75 ವರ್ಷ ಎಂಬುದು ಒಂದು ಮಹತ್ವದ ಘಟ್ಟ. ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬದ ಆಚರಣೆ ಮೂಲಕ ಯಾರಿಗೆ ಏನು ಸಂದೇಶ ತಲುಪಿಸಬೇಕಿತ್ತೋ ಅದನ್ನು ತಲುಪಿಸುವಲ್ಲಿ ಸಂಘಟಕರು ಯಶಸ್ಸು ಆದಂತಿದೆ. ಸ್ವಪಕ್ಷದಲ್ಲೇ ಎದುರಾಳಿಗಳು ಇರುವ೦ತೆ, ವಿರೋಧ ಪಕ್ಷಗಳಲ್ಲೂ ಅವರಿಗೆ ಸ್ನೇಹಿತರಿದ್ದಾರೆ. ಈ ಕಾರ್ಯಕ್ರಮಕ್ಕೆ ಬೇರೆ ಪಕ್ಷಗಳ ನಾಯಕರನ್ನೂ ಕರೆಯಬಹುದಿತ್ತು. ಆಗ ಅದು ಮಾದರಿ ನಡೆ ಆಗುತ್ತಿತ್ತು. ಈ ಅವಕಾಶ ಬಳಸಿಕೊಳ್ಳಲಿಲ್ಲ.