ತಿರುಮಲ ತಿರುಪತಿ ದೇವಸ್ಥಾನಂನಿಂದ (ಟಿಟಿಡಿ) ಉದಯಾಸ್ತಮಾನ ಸೇವಾ ಟಿಕೆಟ್ ಮಾರಾಟ ಆರಂಭವಾಗಿದೆ (ಪ್ರ.ವಾ., ಫೆ. 17). ಭಕ್ತ: ತಿಮ್ಮಪ್ಪನೇ ನನ್ನನ್ನು ಈ ಭವದಿಂದ ಮುಕ್ತನನ್ನಾಗಿ ಮಾಡಯ್ಯಾ... ನನ್ನ ಪ್ರಾಣವನ್ನೇ ನಿನಗರ್ಪಿಸುವೆನು! ತಿಮ್ಮಪ್ಪ: ನಿನ್ನ ಭವದ ಮಾತಂತಿರಲಿ ಭಕ್ತನೇ, ಮೊದಲು ನನ್ನ ಹಣದ ಅಭಾವ ನೀಗಲು ‘ಉದಯಾಸ್ತಮಾನ’ದ ಟಿಕೆಟ್ ಪಡೆದುಬಂದು ನನ್ನನ್ನು ಕುಬೇರನ ಸಾಲದಿಂದ ಋಣಮುಕ್ತನಾಗಲು ಸಹಕರಿಸು.