ಬೆಂಗಳೂರು ನಗರದ ಮನೆಯೊಂದರಲ್ಲಿ ತಿಗಣೆ ನಿಯಂತ್ರಿಸಲು ಕ್ರಿಮಿನಾಶಕ ಸಿಂಪಡಿಸಿದ್ದರಿಂದ ಆರು ವರ್ಷದ ಒಬ್ಬ ಬಾಲಕಿ ಮೃತಪಟ್ಟಿರುವುದು ವರದಿಯಾಗಿದೆ. ಇದು, ಅತ್ಯಂತ ನೋವಿನ ಸಂಗತಿ. ಕ್ರಿಮಿನಾಶಕಗಳನ್ನು ಬೇರೆ ಬೇರೆ ಕಾರಣಕ್ಕೆ ಬಳಸುತ್ತೇವೆ. ಆದರೆ, ಅವುಗಳ ಬಳಕೆ ಮತ್ತು ಪರಿಣಾಮದ ಬಗೆಗೆ ಅನೇಕರಲ್ಲಿ ಸ್ಪಷ್ಟ ಅರಿವು ಇರುವುದಿಲ್ಲ. ಈ ಕಾರಣಕ್ಕಾಗಿ ಅವಘಡಗಳು ಸಂಭವಿಸುತ್ತವೆ.