ಮೊದಲು ಪುಷ್ಪಹಾರವನ್ನು ಹಾಕಿ, ಕೈಯಲ್ಲಿ ಒಂದು ಹೂಗುಚ್ಛವನ್ನು ಕೊಟ್ಟು, ನಂತರ ಒಳ್ಳೆಯ ಪುಸ್ತಕವನ್ನು ಪ್ರದಾನ ಮಾಡಿದರೆ ಎಷ್ಟು ಚೆನ್ನ? ಅಲ್ಲದೆ, ಇದು ಒಂದು ಗೌರವದ ಸಂಗತಿಯಾಗಿಯೂ ಕಾಣುತ್ತದೆ. ಇದರಿಂದ ಪುಷ್ಪ ಮಾರಾಟಕ್ಕೂ ಸಹಾಯವಾಗುವುದಲ್ಲದೆ ರೈತನಿಗೂ ತಾನು ಬೆಳೆದಂತಹ ಹೂವು ಸದ್ವಿನಿಯೋಗವಾಗುತ್ತಿದೆ ಎನ್ನುವ ಭಾವನೆ ಮೂಡಿಸುತ್ತದೆ.