ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅವರು 30 ಸಾವಿರ ‘ಹೆಬ್ಬೆಟ್ಟುಗಳು’ ಪರಿಷತ್ತಿನ ಸದಸ್ಯರಾಗಿ ರುವುದಾಗಿಯೂ, ಅವರಿಗೆ ಅಕ್ಷರ ಕಲಿಸಿ ಪರೀಕ್ಷೆ ನಡೆಸುವುದಾಗಿಯೂ ಹೇಳಿಕೆ ನೀಡಿದ್ದಾರೆ (ಪ್ರ.ವಾ., ಫೆ. 12). ಒಂದು ಭಾಷಾ ಸಮುದಾಯದಲ್ಲಿ ಅಕ್ಷರಸ್ಥರು ಮತ್ತು ಅನಕ್ಷರಸ್ಥರು ಎಂಬ ವಿಂಗಡಣೆ ಮಾಡುವುದೇ ಅಪರಾಧ. ನಾವೀಗ ಅನುಸಂಧಾನ ಮಾಡುತ್ತಿರುವ ಕನ್ನಡ ಸಾಹಿತ್ಯ- ಸಂಸ್ಕೃತಿಯ ಬೆಳವಣಿಗೆಯಲ್ಲಿ ಅಕ್ಷರಸ್ಥರಿಗಿಂತ ಅನಕ್ಷರಸ್ಥರ ಕೊಡುಗೆ ದೊಡ್ಡದು.