ತಿಳಿವಳಿಕೆಯ ಅಭಾವದಿಂದ ದಾರಿ ತಪ್ಪಿರುವ ಜನರಲ್ಲಿ ಜೀವನ್ಮುಖಿ ಚಿಂತನೆ, ಬೆಳಕು ಮೂಡುವಂತೆ ಮಾಡುವ ಗುರುತರ ಹೊಣೆ ಪ್ರಜ್ಞಾವಂತರ ಮೇಲಿದೆ. ಇದಕ್ಕಾಗಿ ಅಗತ್ಯವೆನಿಸಿದರೆ ಪ್ರತಿವರ್ಷ ಸರ್ವಧರ್ಮ ಸಮ್ಮೇಳನ ಆಯೋಜಿಸಬಹುದು. ಎಲ್ಲ ಧರ್ಮಗಳ ಗುರುಗಳು, ಮಠಾಧೀಶರು, ಪಾದ್ರಿಗಳು, ಮೌಲ್ವಿಗಳು ಅದರಲ್ಲಿ ಭಾಗವಹಿಸಿ ಜನರಲ್ಲಿ ಅರಿವು ಮೂಡಿಸಬೇಕು. ಮಾನವ ಘನತೆಯನ್ನು ಎತ್ತಿಹಿಡಿಯುವಂತಹ ಕೆಲಸ ತುರ್ತಾಗಿ ಆಗಬೇಕಿದೆ. ಅಮಾಯಕರ ಬದುಕನ್ನು ಯಾವುದೇ ಕಾರಣಕ್ಕೆ ಅಪಾಯಕ್ಕೆ ದೂಡಬಾರದು.