ಆದರೆ, ಹೆಚ್ಚಿನ ಮಕ್ಕಳ ಬ್ಯಾಂಕ್ ಖಾತೆಯಲ್ಲಿರುವ ಹೆಸರಿಗೂ ಇಲಾಖೆಯ ತಂತ್ರಾಂಶದಲ್ಲಿರುವ ಹೆಸರಿಗೂ ತಾಳೆಯಾಗುತ್ತಿಲ್ಲ. ಈ ಕಾರಣದಿಂದ ಬಹುತೇಕ ಫಲಾನುಭವಿ ಮಕ್ಕಳು ಈ ಪರಿವರ್ತನಾ ವೆಚ್ಚವನ್ನು ಪಡೆಯುವುದರಿಂದ ವಂಚಿತರಾಗುತ್ತಿದ್ದಾರೆ. ಅಲ್ಲದೆ ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸುವಂತೆ ಶಿಕ್ಷಣ ಇಲಾಖೆಯಿಂದ ಶಾಲಾ ಮುಖ್ಯೋಪಾಧ್ಯಾಯರಿಗೆ ಒತ್ತಡವೂ ಇರುವುದರಿಂದ ಹಲವು ಮುಖ್ಯೋಪಾಧ್ಯಾಯರಿಗೆ ಇದು ತಲೆನೋವಾಗಿ ಪರಿಣಮಿಸಿದೆ. ಆದ್ದರಿಂದ ಇಲಾಖೆಯು ಬಿಸಿಯೂಟದ ಪರಿವರ್ತನಾ ವೆಚ್ಚವನ್ನು ಮಕ್ಕಳಿಗೆ ವಿತರಿಸುವ ಪದ್ಧತಿಯನ್ನು ಬದಲಿಸಿ ಸೂಕ್ತ ಮಾರ್ಗೋಪಾಯ ಹುಡುಕಬೇಕಿದೆ. ಇದರಿಂದ ಆಗುತ್ತಿರುವ ಒತ್ತಡವನ್ನು ತಪ್ಪಿಸುವುದರ ಜೊತೆಗೆ ಎಲ್ಲ ಮಕ್ಕಳಿಗೂ ಸುಗಮವಾಗಿ ಹಣ ಸಂದಾಯವಾಗುವಂತೆ ಕ್ರಮ ಕೈಗೊಳ್ಳಬೇಕಿದೆ.