ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಸಂದಾಯ: ಅವೈಜ್ಞಾನಿಕ ಪದ್ಧತಿ ಬದಲಾಗಲಿ

Last Updated 19 ಜನವರಿ 2022, 15:07 IST
ಅಕ್ಷರ ಗಾತ್ರ

ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿರುವುದು ಸರಿಯಷ್ಟೆ. ಕೋವಿಡ್ ಸಮಯದಲ್ಲಿ ಭೌತಿಕ ತರಗತಿಗಳು ನಡೆಯದಿರುವುದರಿಂದ ಆ ಸಮಯದಲ್ಲಿ ವಿತರಣೆ ಮಾಡಬೇಕಿದ್ದ ಬಿಸಿಯೂಟದ ಬದಲಾಗಿ ಅದರ ಪರಿವರ್ತನಾ ವೆಚ್ಚವನ್ನು ಮಕ್ಕಳ ಬ್ಯಾಂಕ್ ಖಾತೆಗೆ ಸಂದಾಯ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶದ ಬಹುತೇಕ ಎಲ್ಲ ಮಕ್ಕಳು ಬ್ಯಾಂಕ್ ಖಾತೆಯನ್ನೂ ಹೊಂದಿದ್ದಾರೆ.

ಆದರೆ, ಹೆಚ್ಚಿನ ಮಕ್ಕಳ ಬ್ಯಾಂಕ್ ಖಾತೆಯಲ್ಲಿರುವ ಹೆಸರಿಗೂ ಇಲಾಖೆಯ ತಂತ್ರಾಂಶದಲ್ಲಿರುವ ಹೆಸರಿಗೂ ತಾಳೆಯಾಗುತ್ತಿಲ್ಲ. ಈ ಕಾರಣದಿಂದ ಬಹುತೇಕ ಫಲಾನುಭವಿ ಮಕ್ಕಳು ಈ ಪರಿವರ್ತನಾ ವೆಚ್ಚವನ್ನು ಪಡೆಯುವುದರಿಂದ ವಂಚಿತರಾಗುತ್ತಿದ್ದಾರೆ. ಅಲ್ಲದೆ ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸುವಂತೆ ಶಿಕ್ಷಣ ಇಲಾಖೆಯಿಂದ ಶಾಲಾ ಮುಖ್ಯೋಪಾಧ್ಯಾಯರಿಗೆ ಒತ್ತಡವೂ ಇರುವುದರಿಂದ ಹಲವು ಮುಖ್ಯೋಪಾಧ್ಯಾಯರಿಗೆ ಇದು ತಲೆನೋವಾಗಿ ಪರಿಣಮಿಸಿದೆ. ಆದ್ದರಿಂದ ಇಲಾಖೆಯು ಬಿಸಿಯೂಟದ ಪರಿವರ್ತನಾ ವೆಚ್ಚವನ್ನು ಮಕ್ಕಳಿಗೆ ವಿತರಿಸುವ ಪದ್ಧತಿಯನ್ನು ಬದಲಿಸಿ ಸೂಕ್ತ ಮಾರ್ಗೋಪಾಯ ಹುಡುಕಬೇಕಿದೆ. ಇದರಿಂದ ಆಗುತ್ತಿರುವ ಒತ್ತಡವನ್ನು ತಪ್ಪಿಸುವುದರ ಜೊತೆಗೆ ಎಲ್ಲ ಮಕ್ಕಳಿಗೂ ಸುಗಮವಾಗಿ ಹಣ ಸಂದಾಯವಾಗುವಂತೆ ಕ್ರಮ ಕೈಗೊಳ್ಳಬೇಕಿದೆ.

ಸೋಮಲಿಂಗಪ್ಪ ಬೆಣ್ಣಿ ಗುಳದಳ್ಳಿ, ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT