ರಾಮನಗರದಲ್ಲಿ ಸ್ಥಾಪನೆ ಮಾಡಲು ಉದ್ದೇಶಿಸಿರುವ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ₹ 359 ಕೋಟಿ ಬಿಡುಗಡೆ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ನಡೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ #ಸಂಸ್ಕೃತವಿವಿಬೇಡ ಎಂದು ಅಭಿಯಾನವನ್ನು ನಡೆಸಲಾಗಿ, ಇದು ಬಹಳಷ್ಟು ಟ್ರೆಂಡ್ ಆಗಿದೆ. ಕರ್ನಾಟಕದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಪ್ರಸ್ತುತ್ತ ಸರ್ಕಾರ ಬಹಳಷ್ಟು ಮಣೆ ಹಾಕುತ್ತಿರುವುದು ಸಹಜವಾಗಿ ಅನೇಕ ಕನ್ನಡಾಭಿಮಾನಿಗಳ ಕೋಪಕ್ಕೆ ತುತ್ತಾಗಿದೆ.