ಒಂದು ವೇಳೆ ನೋಟಾಗೆ ಅತೀ ಹೆಚ್ಚು ಮತಗಳು ಬಂದರೆ, ಆ ಕ್ಷೇತ್ರದಲ್ಲಿ ಯಾವುದೇ ಅಭ್ಯರ್ಥಿಆಯ್ಕೆಯಾಗಿಲ್ಲ ಎಂದು ಘೋಷಿಸಬೇಕು. ಬೇರೆ ಅಭ್ಯರ್ಥಿಗಳೊಂದಿಗೆ ಮತ್ತೊಮ್ಮೆ ಚುನಾವಣೆ ನಡೆಸಬೇಕು. ಇದರಿಂದ, ಜನರ ಆಶೋತ್ತರಗಳಿಗೆ ಒಪ್ಪದ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕೆ ಇಳಿಸುವ ರಾಜಕೀಯ ಪಕ್ಷಗಳಿಗೆ ಒಂದು ಪಾಠ ಕಲಿಸಿದಂತಾಗುತ್ತದೆ. ಆದರೆ, ಹೀಗೆ ಮಾಡುವಾಗ ಸಾರ್ವಜನಿಕ ಹಣದ ವ್ಯರ್ಥವನ್ನು ಪರಿಗಣಿಸಿ, ಮೊದಲ ಬಾರಿ ಸ್ಪರ್ಧಿಸಿದ ಎಲ್ಲಾ ಅಭ್ಯರ್ಥಿಗಳಿಂದ ಆ ಚುನಾವಣೆಗೆ ವೆಚ್ಚವಾದ ಹಣವನ್ನು ಸಂಗ್ರಹಿಸಬೇಕು. ಈ ರೀತಿ ಒಂದು ವ್ಯವಸ್ಥಿತ ರೂಪುರೇಷೆಯನ್ನು ಚುನಾವಣೆಗೆ ನೀಡಿದಾಗ ಪ್ರಜಾಪ್ರಭುತ್ವ ಸಾರ್ಥಕವಾಗುತ್ತದೆ.