ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ. ಜಿಲ್ಲೆಗೆ ಮಳೆಯ ಕೊರತೆಯಿಂದ ಬರದ ನಾಡು ಎಂಬ ಹೆಸರಿದೆ. ಹಾಗೆಂದು ಪ್ರತಿ ಕ್ಷೇತ್ರದಲ್ಲೂ ‘ಬರ’ದ ಛಾಯೆಯನ್ನೇ ಕಾಣುವಂತೆ ಆಗಬಾರದು. ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶ ಗಿಟ್ಟಿಸಿಕೊಳ್ಳಲು ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆ ಗಮನಹರಿಸಬೇಕಿದೆ.