ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ವಾರಗಳ ಅವಧಿಯಲ್ಲಿ ಮೂರು ಕೊಲೆಗಳಾಗಿವೆ. ಇಲ್ಲಿ ಹತ್ಯೆಗೆ ಒಳಗಾಗಿದ್ದು ಯಾವುದೋ ಒಂದು ಮತ–ಜಾತಿಗೆ ಸೇರಿದ ವ್ಯಕ್ತಿಗಳಲ್ಲ, ಮಾನವೀಯತೆ. ಹರಿದ ನೆತ್ತರು, ಸುರಿದ ಕಣ್ಣೀರಿನ ಬಣ್ಣ ಒಂದೇ. ಮೊದಲು ಮಾನವರಾಗೋಣ .ಸ್ವಾರ್ಥಶಕ್ತಿಗಳ ಹುನ್ನಾರಗಳಿಗೆ ಮುಗ್ಧರು ಮರುಳಾಗುವುದುಬೇಡ. ರಾಜಕೀಯ ದುಷ್ಟ ಆಟಗಳಿಂದ ದೂರವಿದ್ದು, ಶಾಂತಿಯಿಂದ ಸಹಬಾಳ್ವೆ ನಡೆಸಲು ಅಲ್ಲಿನ ಜನ ಪಣ ತೊಡಬೇಕು.
-ಲೋಹಿತ ಹಸೂರೆ,ಚಿಕ್ಕೋಡಿ