ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆಸದಿದ್ದರೆ ಓದಿನ ಅಭಿರುಚಿ...

ಅಕ್ಷರ ಗಾತ್ರ

‘ಓದು ತೊರೆವ ನಾಡು ಬೆಳೆದೀತು ಹೇಗೆ?’ ಎಂಬ ಸದಾಶಿವ್ ಸೊರಟೂರು ಅವರ ಲೇಖನಕ್ಕೆ (ಸಂಗತ, ಏ. 5) ಪೂರಕವಾಗಿ ಈ ಪ್ರತಿಕ್ರಿಯೆ. ಕಳೆದ ವಾರ ಪತ್ರಿಕೆಯ ಬಗ್ಗೆ ವಿಚಾರಿಸಲು ಪುಸ್ತಕದ ಅಂಗಡಿಗೆ ಹೋಗಿದ್ದೆ. ‘ಬಹಳಷ್ಟು ದಿನವಾಯಿತು ಸರ್, ವಾರಪತ್ರಿಕೆ, ಮಾಸಪತ್ರಿಕೆಗಳನ್ನು ಮಾರುವುದನ್ನು ಬಿಟ್ಟು’ ಎಂದು ಬಹಳ ಬೇಸರದಿಂದ ಹೇಳಿದರು. ಇದಕ್ಕೆ ಕಾರಣ ಏನಾದರೂ ಇದ್ದಿರಬಹುದು. ಅನುಭವಕ್ಕೆ ಬಂದದ್ದನ್ನು ಇಲ್ಲಿ ಉಲ್ಲೇಖಿಸಿದ್ದೇನೆ. ಒಟ್ಟಾರೆ ಓದುವ ಅಭಿರುಚಿ ಕ್ಷೀಣಿಸಿರುವುದಂತೂ ದಿಟ.

ಗ್ರಂಥಾಲಯಗಳಲ್ಲಿ ಓದುಗರೇನೋ ಕಾಣುತ್ತಾರೆ. ಆದರೆ ಅವರಲ್ಲಿ ಬಹುತೇಕರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರು ಆಗಿರುತ್ತಾರೆ. ಮನೆಗಳಲ್ಲಿ ಪುಸ್ತಕದ ರಾಶಿಗಳು ಇರುತ್ತವೆ. ಅವು ಈ ಹಿಂದೆ ಮನೆಯ ಮಕ್ಕಳು ವೃತ್ತಿಪರ ಪ್ರವೇಶ ಪರೀಕ್ಷೆಗೆ ಓದಿದವು ಆಗಿರುತ್ತವೆ. ಮನೆಯಲ್ಲಿನ ವಿದ್ಯಾವಂತರು, ಶಿಕ್ಷಕರು, ವಿವಿಧ ನೌಕರರು ಮಕ್ಕಳಲ್ಲಿ ಓದಿನ ಅಭಿರುಚಿಯನ್ನು ಬೆಳೆಸಬೇಕಾಗಿದೆ. ಇಲ್ಲದೇಹೋದಲ್ಲಿ ನಾಡಿನ ಭವಿಷ್ಯದ ಪ್ರಜೆಗಳು ಬೌದ್ಧಿಕ ದಾರಿದ್ರ್ಯ ಹೊಂದುವ ಅಪಾಯ ಕಟ್ಟಿಟ್ಟ ಬುತ್ತಿ.

ಮಂಜುನಾಥ ಸ್ವಾಮಿ ಕೆ.ಎಂ.,ಶ್ರೀರಾಮನಗರ, ಗಂಗಾವತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT