ಪ್ರಮುಖ ಖಾತೆಗಾಗಿ ಪಟ್ಟುಹಿಡಿಯುವುದರ ಹಿಂದೆ, ಭ್ರಷ್ಟಾಚಾರದಲ್ಲಿ ತೊಡಗುವ ಉದ್ದೇಶವಿದೆಯೇ ಹೊರತು ಕ್ಷೇತ್ರದ ಅಭಿವೃದ್ಧಿಯಾಗಲೀ, ಮತದಾರ ಪ್ರಭುಗಳ ಕಲ್ಯಾಣವಾಗಲೀ ಅಲ್ಲ ಎಂಬುದು ಸ್ಪಷ್ಟ. ಅಧಿಕಾರಕ್ಕಾಗಿ ಮಾನ– ಮರ್ಯಾದೆಯನ್ನು ಗಾಳಿಗೆ ತೂರಿ, ಸಮಯಸಾಧಕ ರಾಜಕಾರಣ ಮಾಡುತ್ತಿರುವ ಜನಪ್ರತಿನಿಧಿಗಳಿಗೆ ಧಿಕ್ಕಾರವಿರಲಿ. ಇಂಥ ರಾಜಕಾರಣಿಗಳಿಗೆಲ್ಲ ಪಾಠ ಕಲಿಸುವ ಸಮಯ ಬಂದಿದೆ. ‘ನಿರಂತರ ಎಚ್ಚರವೇ ಪ್ರಜಾಪ್ರಭುತ್ವವನ್ನು ಜೀವಂತವಾಗಿ ಇಡುತ್ತದೆ’ ಎಂಬುದನ್ನು ಮತದಾರರು ಮರೆಯಬಾರದು. ಮತದಾರ ಎಚ್ಚೆತ್ತುಕೊಂಡರೆ ರಾಜಕಾರಣದಲ್ಲಿ ಆಮೂಲಾಗ್ರ ಬದಲಾವಣೆ ತರಬಹುದು.