ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮವಾಗಿ ‘ಪ್ರಜಾವಾಣಿ’ಯ ಹಾವೇರಿ ಜಿಲ್ಲಾ ಹಿರಿಯ ವರದಿಗಾರ
ಎಂ.ಸಿ.ಮಂಜುನಾಥ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ (ಪ್ರ.ವಾ., ನ. 21). ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಟ್ರ್ಯಾಕ್ಟರ್ಗಳಲ್ಲಿ ಹುಲ್ಲು, ಭತ್ತ, ಅಡಿಕೆಗೊನೆ ಮುಂತಾದವನ್ನು ಬೇಕಾಬಿಟ್ಟಿಯಾಗಿ ತುಂಬಲಾಗುತ್ತದೆ. ಟ್ರೇಲರ್ ರಿಫ್ಲೆಕ್ಟರ್ ಅಥವಾ ಲೈಟ್ ಇಲ್ಲದಿರುವುದರಿಂದ, ತೀರಾ ಹತ್ತಿರ ಬಂದಾಗಷ್ಟೇ ದ್ವಿಚಕ್ರ ವಾಹನ ಸವಾರರಿಗೆ ಟ್ರೇಲರ್ ಗೋಚರಿಸುತ್ತದೆ. ಹೆದ್ದಾರಿಗಳಲ್ಲಿ ಮುಖ್ಯವಾಗಿ ಸಂಜೆ, ರಾತ್ರಿ ವೇಳೆಯಲ್ಲಿ ಇಂತಹ ಕಾರಣಕ್ಕೆ ನಿಯಂತ್ರಣ ತಪ್ಪಿ ಅಪಘಾತಗಳಾಗುವುದು ಹೆಚ್ಚು. ಸಂಚಾರ ಪೊಲೀಸರು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡರೆ ಹಲವರ ಜೀವ ಉಳಿಸಬಹುದು.