ನೀತಿ ಆಯೋಗದ ‘ಬಹು ಆಯಾಮದ ಬಡತನ ಸೂಚ್ಯಂಕ ವರದಿ’ಯು (ಪ್ರ.ವಾ., ಜ. 5) ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ, ಮುಖ್ಯವಾಗಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಬಹು ಆಯಾಮದ ಬಡತನ ಅಧಿಕ ಮಟ್ಟದಲ್ಲಿರುವುದನ್ನು ಸಚಿತ್ರವಾಗಿ ದಾಖಲಿಸಿದೆ. ‘ಪ್ರಾದೇಶಿಕ ಅಸಮಾನತೆ’ ಕುರಿತ ತಾರತಮ್ಯದ ಬಗ್ಗೆಯೂ ವರದಿಯು ಬೊಟ್ಟು ಮಾಡಿ ತೋರಿಸಿದೆ. ಇದರ ಜೊತೆಗೆ ‘ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ– 5’ರಲ್ಲಿ (2019- 20) ಮಕ್ಕಳು ಮತ್ತು ಮಹಿಳೆಯರಲ್ಲಿ ಅನೀಮಿಯ (ರಕ್ತಹೀನತೆ/ಅಪೌಷ್ಟಿಕತೆ) ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಅತ್ಯಧಿಕ ಮಟ್ಟದಲ್ಲಿರುವುದನ್ನು ಗಮನಿಸಬೇಕಾಗಿದೆ.