ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಾನವೀಯ, ದುರಂತಮಯ

Last Updated 6 ಜುಲೈ 2021, 19:31 IST
ಅಕ್ಷರ ಗಾತ್ರ

ಆದಿವಾಸಿಗಳಿಗೆ ‘ಜಲ್, ಜಂಗಲ್, ಝಮೀನ್’ (ನೀರು, ಅರಣ್ಯಭೂಮಿ, ವಸತಿ) ಹಕ್ಕು ಮತ್ತು ‘ಸುಳ್ಳು ದೋಷಾರೋಪಗಳನ್ನು ಎದುರಿಸುತ್ತಿರುವ ಲಕ್ಷಾಂತರ ವಿಚಾರಣಾಧೀನ ಕೈದಿಗಳ ಹಕ್ಕು’ಗಳಿಗಾಗಿ ತಮ್ಮ ಇಡೀ ಜೀವನವನ್ನು ಧಾರೆ ಎರೆದಿದ್ದವರು 84 ವರ್ಷದ ಫಾದರ್ ಸ್ಟ್ಯಾನ್‌ ಸ್ವಾಮಿ. ಬಂಧನದಲ್ಲಿದ್ದ ಅವರು, ಪಾರ್ಕಿನ್ಸನ್ಸ್‌ ಕಾಯಿಲೆಯಿಂದ ನರಳುತ್ತಿದ್ದರೂ ಜಾಮೀನಿನಿಂದ ವಂಚಿತರಾಗಿ ನರಳುತ್ತಲೇ ದೇಹತ್ಯಾಗ ಮಾಡಬೇಕಾಗಿ ಬಂದುದು ಅಮಾನವೀಯ ಹಾಗೂ ದುರಂತಮಯ.

ಆಡಳಿತಾರೂಢರು ಆವೇಶಭರಿತರಾಗಿ ನಡೆಸುತ್ತಿರುವ ದ್ವೇಷಪೂರ್ಣ ಆಡಳಿತದ ವೈಖರಿಗೆ ಸ್ವಾಮಿಯವರ ಸಾವು ಒಂದು ನಿದರ್ಶನ. ಹೀಗೆ ನ್ಯಾಯ ಕುರುಡಾದರೆ, ಜನ ಕಿವುಡಾದರೆ, ಆಡಳಿತದ ದುಷ್ಟ ಕಪಿಮುಷ್ಟಿಯಿಂದ ದೇಶಕ್ಕೆಂದು ಮುಕ್ತಿ?

-ಕೆ.ಎನ್.ಭಗವಾನ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT