ಆದಿವಾಸಿಗಳಿಗೆ ‘ಜಲ್, ಜಂಗಲ್, ಝಮೀನ್’ (ನೀರು, ಅರಣ್ಯಭೂಮಿ, ವಸತಿ) ಹಕ್ಕು ಮತ್ತು ‘ಸುಳ್ಳು ದೋಷಾರೋಪಗಳನ್ನು ಎದುರಿಸುತ್ತಿರುವ ಲಕ್ಷಾಂತರ ವಿಚಾರಣಾಧೀನ ಕೈದಿಗಳ ಹಕ್ಕು’ಗಳಿಗಾಗಿ ತಮ್ಮ ಇಡೀ ಜೀವನವನ್ನು ಧಾರೆ ಎರೆದಿದ್ದವರು 84 ವರ್ಷದ ಫಾದರ್ ಸ್ಟ್ಯಾನ್ ಸ್ವಾಮಿ. ಬಂಧನದಲ್ಲಿದ್ದ ಅವರು, ಪಾರ್ಕಿನ್ಸನ್ಸ್ ಕಾಯಿಲೆಯಿಂದ ನರಳುತ್ತಿದ್ದರೂ ಜಾಮೀನಿನಿಂದ ವಂಚಿತರಾಗಿ ನರಳುತ್ತಲೇ ದೇಹತ್ಯಾಗ ಮಾಡಬೇಕಾಗಿ ಬಂದುದು ಅಮಾನವೀಯ ಹಾಗೂ ದುರಂತಮಯ.