‘ಸ್ನೇಹ ಬಂಧನ ಧರ್ಮ ಸಂಗಮ’ ಕಾರ್ಯಕ್ರಮವನ್ನು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ ಉದ್ಘಾಟಸಲಿದ್ದಾರೆ. ಹೊಸಪೇಟೆಯ ಕೊಟ್ಟೂರು ಸ್ವಾಮಿ ಮಠದ ಮದ್ವೀರಶೈವ ಶಿವಯೋಗ ಮಂದಿರ ಧರ್ಮ ಸಂಸ್ಥೆಯ ಅಧ್ಯಕ್ಷ ಡಾ.ಸಂಗನ ಬಸವ ಸ್ವಾಮಿಗಳಿಗಳಿಗೆ ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು. ವೀರಶೈವ-ಲಿಂಗಾಯತ ಧರ್ಮ ಸಾಮರಸ್ಯ-ಸಂಘಟನೆ-ಸಂವರ್ಧನೆಗೆ ಈ ಧರ್ಮ ಸಮಾರಂಭ ಸಾಕ್ಷಿಯಾಗಲಿದೆ ಎಂದರು.