‘ಮೀಸಲಾತಿ ಎಲ್ಲಿಯವರೆಗೆ ಬೇಕು ಎಂದು ಫಲಾನುಭವಿಗಳು ಬಯಸುತ್ತಾರೆಯೋ ಅಲ್ಲಿಯವರೆಗೂ ಅದು ಮುಂದುವರಿಯಬೇಕು’ ಎಂಬ ಆರ್ಎಸ್ಎಸ್ನ ಹೇಳಿಕೆ ನೋಡಿ (ಪ್ರ.ವಾ., ಸೆ.10) ಆಶ್ಚರ್ಯವಾಯಿತು. ಮೀಸಲಾತಿಯ ಪ್ರಯೋಜನ ಪಡೆದವರು ಮತ್ತು ಮೀಸಲಾತಿ ಸೌಲಭ್ಯ ಇಲ್ಲದವರ ನಡುವೆ ಸೌಹಾರ್ದ ವಾತಾವರಣದಲ್ಲಿ ಸಂವಾದ ನಡೆಯಬೇಕೆಂಬ ಹೇಳಿಕೆ ನೀಡಿ ಆರ್ಎಸ್ಎಸ್ ಮುಖಂಡ ಮೋಹನ್ ಭಾಗವತ್ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಆದರೆ ಆರ್ಎಸ್ಎಸ್ ತಾನು ಮೀಸಲಾತಿಯ ಪರ ಎಂದು ಒಮ್ಮಿಂದೊಮ್ಮೆಲೇ ಬಿಂಬಿಸಿಕೊಳ್ಳುತ್ತಿರುವುದನ್ನು ನೋಡಿದರೆ, ರಾಜಕೀಯ ಚದುರಂಗದಾಟಕ್ಕೆ ಎಲ್ಲಿ ಮೀಸಲಾತಿಯೇ ದಾಳವಾಗಿ
ಬಿಡುತ್ತದೆಯೋ ಎಂಬ ಕಳವಳ ಉಂಟಾಗುತ್ತಿದೆ.