ವಿವಿಧ ಸಮುದಾಯಗಳು ತಮ್ಮ ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ಮೀಸಲಾತಿ ಕೋರುತ್ತಿರುವುದು, ಅವುಗಳಿಗೆ ಸಂಬಂಧಿಸಿದ ಸಭೆ, ಸಮಾರಂಭಗಳಲ್ಲಿ ಶಾಸಕರು, ಮಂತ್ರಿಗಳು, ಮುಖ್ಯಮಂತ್ರಿ ಭಾಗವಹಿಸಿ, ಹೋರಾಟಗಾರರ ಅಹವಾಲು ಸ್ವೀಕರಿಸಿ ಭರವಸೆ ನೀಡುವುದು ನಡೆಯುತ್ತಿದೆ. ಮೀಸಲಾತಿಯು ಅಶಕ್ತರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಮೆಟ್ಟಿಲು ಇದ್ದಂತೆ. ಅದು, ಶಕ್ತ ಸಮಾಜದ ನಿರ್ಮಾಣಕ್ಕೆ ಊರುಗೋಲು ಆಗಬೇಕಿದೆ. ಮೀಸಲಾತಿಯ ಮೂಲಕ ಶಕ್ತರಾಗಿರುವವರು ಅದೇ ಸಮುದಾಯದ ಅಶಕ್ತರನ್ನು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಹಾಗೂ ಬೌದ್ಧಿಕವಾಗಿ ಮೇಲೆತ್ತುವ ಕಾರ್ಯಗಳಲ್ಲಿ ತೊಡಗಬೇಕಿದೆ. ತರ್ಕ, ವಿವೇಚನೆ ಇಲ್ಲದೆಸರ್ಕಾರದ ಮೇಲೆ ಅನವಶ್ಯಕವಾಗಿ ಒತ್ತಡ ಹೇರುವುದು ತರವಲ್ಲ.