ವಿಧಾನಸಭೆ ಈ ನಾಡಿನ ಪರಮೋಚ್ಚ ವೇದಿಕೆ. ಅಲ್ಲಿ ನಮ್ಮ ಶಾಸಕರ ಒಂದೊಂದು ಮಾತಿನಲ್ಲೂ ಲಕ್ಷಾಂತರ ಪ್ರಜೆಗಳ ಧ್ವನಿ ಇದೆ. ಪ್ರಜೆಗಳಿಗೆ, ನಾಡಿಗೆ ಮಾದರಿಯಾಗಿ ಇರಬೇಕಾದುದು ಜನಪ್ರತಿನಿಧಿಗಳ ನೈತಿಕ ಕರ್ತವ್ಯ ಕೂಡ. ಹೀಗಿರುವಾಗ, ಒಂದಿಬ್ಬರು ಶಾಸಕರು ರೆಸಾರ್ಟ್ನಲ್ಲಿ ಹೊಡೆದಾಡಿಕೊಂಡಿದ್ದಾರೆ ಎನ್ನಲಾದ ವಿಷಯ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವವರಿಗೆ ನೋವನ್ನು ಉಂಟುಮಾಡಿದೆ.