ಸಚಿವ ಆರ್.ಅಶೋಕ ಅವರ ಪುತ್ರ ಇದ್ದರು ಎಂದು ಹೇಳಲಾಗುವ ಅಪಘಾತದ ಕೆಲವು ವಿಡಿಯೊ ತುಣುಕುಗಳಲ್ಲಿ ಒಂದು ವಿಡಿಯೊ ತುಣುಕಿನ ಬಗೆಗೆ ಹೇಳಬಯಸುತ್ತೇನೆ. ಅಪಘಾತವಾದ ಸ್ಥಳದ ಸಮೀಪ ಇರುವ ಪೆಟ್ರೋಲ್ ಬಂಕಿನ ಸಿ.ಸಿ ಟಿ.ವಿ ಕ್ಯಾಮೆರಾದ ಆಧಾರದ ಮೇಲೆ ಮಾಧ್ಯಮದವರು, ಪಕ್ಕದಲ್ಲಿ ಸಾಗುತ್ತಿರುವ ಲಾರಿಯನ್ನು ಹಿಂದಕ್ಕೆ ಹಾಕುವ ಸಲುವಾಗಿ ಕಾರನ್ನು ಎಡಗಡೆಯಿಂದ ನುಗ್ಗಿಸಲು ಹೋದದ್ದು ಅಪಘಾತಕ್ಕೆ ಕಾರಣ ಎಂದು ಹೇಳುತ್ತಿದ್ದಾರೆ. ಈ ಘಟನೆಯ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಆದರೆ ಎಡಗಡೆಯಿಂದ ಮುನ್ನುಗ್ಗುವ ಪರಿಸ್ಥಿತಿ ಹೇಗೆ ಉಂಟಾಗಬಹುದು ಎಂದು ನನ್ನ ಅನುಭವದ ಆಧಾರದಿಂದ ಹೇಳುತ್ತೇನೆ.