ಉತ್ತರಪ್ರದೇಶದ ಬಿಜನೋರ್ನಲ್ಲಿ ಸುಮಾರು ₹ 1.16 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ರಸ್ತೆಯೊಂದು ಉದ್ಘಾಟನಾ ಸಮಯದಲ್ಲಿ ತೆಂಗಿನಕಾಯಿ ಒಡೆದಾಗ ಬಿರುಕುಬಿಟ್ಟಿರುವ ಸಂಗತಿ ವರದಿಯಾಗಿದೆ. ಈಡುಗಾಯಿಗೆ ರಸ್ತೆಯೇ ಈಡಾಯಿತು ಎಂದರೆ ಅದೆಷ್ಟು ಕಳಪೆ ಕಾಮಗಾರಿ ಎಂದು ಊಹಿಸಿಕೊಳ್ಳಬಹುದು.
ಗುತ್ತಿಗೆದಾರನಿಂದ ಹಿಡಿದು ಮೇಲಿನ ಹಂತದವರೆಗಿನ ಎಲ್ಲರೂ ಕಾಮಗಾರಿಯ ಹಣವನ್ನು ನೆಕ್ಕಿ ಸವಿದವರೇ ಆಗಿರುತ್ತಾರೆ. ಈ ರೀತಿ ತಿಂದು ಬದುಕಲು ಅಸಹ್ಯವೆನಿಸದೇ? ಇಂತಹವರಿಂದ ಯಾವ ರೀತಿ ಜನಸೇವೆಯನ್ನು ನಿರೀಕ್ಷಿಸಲು ಸಾಧ್ಯ?