ರಾಜಧಾನಿ ಎಂದಮೇಲೆ ಕೆಲವು ವಿಶೇಷ ಕಚೇರಿಗಳು ಇರಬೇಕಾಗುತ್ತದೆ. ಆದರೆ ಅವುಗಳಿಂದಲೇ ಬೆಂಗಳೂರು ಬೃಹತ್ ಆಗಿಲ್ಲ. ಸಂಕಲ್ಪಶಕ್ತಿ ಇಲ್ಲದಿದ್ದಾಗ, ಯೋಜನಾ ಇಲಾಖೆ ದುರ್ಬಲವಾಗಿರುವಾಗ, ಮುತ್ಸದ್ದಿಗಳು ವಿರಳವಾದಾಗ, ದೂರದೃಷ್ಟಿ ಇಲ್ಲದವರದೇ ದರ್ಬಾರು ಆದಾಗ ನೀರಿನ ಜೊತೆಗೆ ಶುದ್ಧ ಗಾಳಿಯೂ ಉಸಿರಾಡಲು ಸಿಗದು. ಆಕ್ಸಿಜನ್ ಟೋಲ್ ಕೇಂದ್ರಗಳು ಬೇಕಾಗುತ್ತವೆ.
-ಸುಬ್ಬರಾಯಪ್ಪ,ಕೆಸರೆ, ಮೈಸೂರು