ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ಪ್ರತಿನಿಧಿಗಳ ಸುರಕ್ಷೆಗೆ ಇರಲಿ ಆದ್ಯತೆ

Last Updated 5 ಜುಲೈ 2020, 19:30 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಸಾವಿರಾರು ಗ್ರಾಮ ವಿದ್ಯುತ್ ಪ್ರತಿನಿಧಿಗಳಿದ್ದು, ಮನೆಮನೆಗೆ ವಿದ್ಯುತ್‌ ಬಿಲ್ ವಿತರಿಸಲು, ತದನಂತರ ವಸೂಲಾತಿಗೆ ಅವರು ಕಡ್ಡಾಯವಾಗಿ ಹೋಗಬೇಕಾಗಿದೆ. ಇದರಿಂದ ಅವರು ನಿತ್ಯವೂ ಸಾರ್ವಜನಿಕ ಸಂಪರ್ಕದಲ್ಲೇ ಇರಬೇಕಾಗುತ್ತದೆ. ಈಗ ಹಳ್ಳಿಗಳಲ್ಲೂ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲಿ ಈ ಪ್ರತಿನಿಧಿಗಳಿಗೆ ಸೋಂಕು ತಗುಲಿದರೆ ಅದರ ಹೊಣೆ ಹೊರುವವರು ಯಾರು? ಸರ್ಕಾರವೇ ಅಥವಾ ವಿದ್ಯುತ್‌ ಕಂಪನಿಗಳೇ ಎಂಬುದು ಸ್ಪಷ್ಟವಿಲ್ಲ. ಈ ಪ್ರತಿನಿಧಿಗಳಿಗೆ ಪಿ.ಎಫ್‌.ನಂತಹ ಕನಿಷ್ಠ ಸೌಲಭ್ಯ ಸಹ ಇಲ್ಲ. ಹಲವಾರು ಮಂದಿ ಹದಿನಾರು ವರ್ಷಗಳಿಂದ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದಾರೆ. ಈ ಹಣದಲ್ಲಿ ಅವರು ಸಂಸಾರ ನಡೆಸುವುದೇ ಕಷ್ಟವಾಗಿದೆ. ಹೀಗಾಗಿ ಸಂಕಷ್ಟದ ಈ ಸಮಯದಲ್ಲಿ ಇವರನ್ನು ‘ಕೊರೊನಾ ವಾರಿಯರ್‌’ಗಳೆಂದು ಪರಿಗಣಿಸಿ, ವಿಮಾ ಸೌಲಭ್ಯ ಮತ್ತು ಇತರ ಸುರಕ್ಷೆಯನ್ನು ಒದಗಿಸಬೇಕು ಮತ್ತು ವೇತನ ಹೆಚ್ಚಿಸಬೇಕು.

-ರಮೇಶ್‌,ಹೆಬ್ಬಸೂರು, ಚಾಮರಾಜನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT