ಒಂದು ಸಮುದಾಯದ ಮಠಾಧೀಶರೊಬ್ಬರು ಇತ್ತೀಚೆಗೆ, ತಮ್ಮ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ, ತಮ್ಮ ಸಮುದಾಯದ ಶಾಸಕರಿಗೆ ಉಪಮುಖ್ಯಮಂತ್ರಿ ಸ್ಥಾನ, ಮಂತ್ರಿ ಪಟ್ಟ ಮತ್ತಿತರ ಸೌಲಭ್ಯಗಳಿಗಾಗಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಹಾಗೆ ಕೇಳುವುದು ಅವರ ಹಕ್ಕು. ಆದರೆ ಅದನ್ನು ಪಡೆಯುವ ಹಾದಿಯಲ್ಲಿ ಸರ್ಕಾರಕ್ಕೆ ಗಡುವು ನೀಡುವುದು, ಸರ್ಕಾರವನ್ನು ಬೀಳಿಸುವಂತಹ ಮಾತನ್ನಾಡುವುದು ಪ್ರಜಾಪ್ರಭುತ್ವಕ್ಕೆ ಮಾಡುವ ಅವಮಾನ.