ಯಾವುದೇ ಶುಭ ಸಮಾರಂಭ ನಡೆಯಬೇಕಾದರೂ ಅಲ್ಲಿ ಮಂಗಳವಾದ್ಯವೇ ಪ್ರಧಾನ. ರಥೋತ್ಸವಗಳು ನಡೆಯುವಾಗಲೂ ಮಂಗಳವಾದ್ಯ ಇರಲೇಬೇಕು. ಆದರೆ, ಇಂತಹ ವಾದ್ಯಗಳನ್ನು ನುಡಿಸುವವರ ಸಂಖ್ಯೆ ಈಗ ಕಡಿಮೆಯಾಗುತ್ತಿದೆ. ಹೀಗಾಗಿ, ಇಂತಹವರ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲು ಒಂದು ಪ್ರತ್ಯೇಕ ಶಾಲೆಯನ್ನು ಆ ಕಲೆಯಲ್ಲಿ ನಿಷ್ಣಾತರಾದವರ ನೇತೃತ್ವದಲ್ಲಿ ನಮ್ಮ ರಾಜ್ಯದಲ್ಲಿ ಸ್ಥಾಪಿಸಬೇಕಾಗಿದೆ.