ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರವಾಣಿ: ಅರಿಯಬೇಕಿದೆ ರಾಜಕೀಯ ಹಿತಾಸಕ್ತಿ

Last Updated 9 ಜನವರಿ 2022, 15:54 IST
ಅಕ್ಷರ ಗಾತ್ರ

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸರ್ಕಾರಿ ಕಾಲೇಜಿನಲ್ಲಿ ಉಂಟಾಗಿರುವ ಸ್ಕಾರ್ಫ್‌- ಕೇಸರಿ ಶಾಲಿನ ವಿವಾದ ಆತಂಕಕಾರಿಯಾಗಿದೆ. ಸ್ಕಾರ್ಫ್‌ ಕೇವಲ ಮುಸಲ್ಮಾನರ ಉಡುಗೆಯಾಗಿರದೆ ಇತರರೂ ಬಳಸುವುದನ್ನು ಕಾಣಬಹುದು. ಆದರೆ, ಕೇಸರಿ ಶಾಲು ಹಿಂದೂಗಳ ಪಾರಂಪರಿಕ ಉಡುಗೆಯ ಭಾಗ ಖಂಡಿತಾ ಅಲ್ಲ (ಕೇಸರಿ ಸನ್ಯಾಸತ್ವದ ಸಂಕೇತ ಎಂದು ಪರಿಗಣಿಸಬಹುದಾದರೂ, ವಿದ್ಯಾರ್ಥಿಗಳು ಸನ್ಯಾಸ ಸ್ವೀಕರಿಸಿಲ್ಲವಲ್ಲ!).

ಇಷ್ಟೇ ಅಲ್ಲದೆ, ಕೇಸರಿ, ಹಸಿರು, ಹಳದಿ- ಕೆಂಪು ಶಾಲುಗಳು ರಾಜಕೀಯ ಹಿತಾಸಕ್ತಿ ಮತ್ತು ಉದ್ದೇಶಗಳ ಕಾರಣಕ್ಕೆ ಬಳಕೆಗೆ ಬಂದವು ಎಂಬುದು ಸರ್ವವಿಧಿತ. ಆದ್ದರಿಂದ, ಈ ಕುರಿತು ಕಾಲೇಜಿನ ಆಡಳಿತ ಮಂಡಳಿಯು ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ತಿಳಿಹೇಳಿ, ಮಕ್ಕಳು ರಾಜಕೀಯ ಹಿತಾಸಕ್ತಿಯ ದಾಳವಾಗುವುದನ್ನು ತಪ್ಪಿಸಬೇಕಾದ ಅವಶ್ಯಕತೆಯಿದೆ.

- ಭಾರ್ಗವ ರಾಮ,ಕೊಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT