ನಗರ ಪ್ರದೇಶಗಳಲ್ಲಿರುವ ಕೆಲವು ಶಾಲೆಗಳ ಸ್ಥಿತಿಯೇ ಶೋಚನೀಯವಾಗಿರುವಾಗ, ಗಡಿ ಭಾಗದ ಶಾಲೆಗಳ ಸ್ಥಿತಿಯನ್ನು ಊಹಿಸುವುದು ಕಷ್ಟಸಾಧ್ಯ. ಇಂತಹ ಸಂದರ್ಭದಲ್ಲಿ ಸಚಿವರು ಶಾಲೆಯಲ್ಲಿಯೇ ಒಂದು ರಾತ್ರಿ ಕಳೆಯುವ ಮುಖಾಂತರ, ಅಲ್ಲಿನ ಸ್ಥಿತಿಗತಿಯನ್ನು ಕಣ್ಣಾರೆ ಕಂಡು, ಪೋಷಕರಿಗೆ ತಮ್ಮ ಮಕ್ಕಳ ಭವಿಷ್ಯದ ಕುರಿತು ಇರುವಂತಹ ಕಳವಳವನ್ನು ದೂರ ಮಾಡಿ, ಸರ್ಕಾರಿ ಶಾಲೆ ಬಗ್ಗೆ ಭರವಸೆ ಮೂಡಿಸುವಂತಹ ಕಾರ್ಯ ಮಾಡಲು ಇದರಿಂದ ಸಾಧ್ಯವಾಗಲಿದೆ.