‘ದೇಹ ಚಿಗುರಲಿ ಎಲೆ ಎಲೆಯಲ್ಲಿ!’ ಎಂಬ ಸದಾಶಿವ್ ಸೊರಟೂರು ಅವರ ಲೇಖನ (ಸಂಗತ, ಜ. 6) ಅರ್ಥ
ವತ್ತಾಗಿದೆ. ಆದರೆ ‘ನ್ಯಾಚುರಲ್ ಆರ್ಗ್ಯಾನಿಕ್ ರಿಡಕ್ಷನ್’ ಪ್ರಕ್ರಿಯೆಯನ್ನು ಅಮೆರಿಕದ ನ್ಯೂಯಾರ್ಕ್ ಆಡಳಿತವು ಈಚೆಗೆ ಕಾನೂನುಬದ್ಧಗೊಳಿಸಿದಂತೆ ನಮ್ಮ ದೇಶದಲ್ಲಿ ಮಾಡಲಾದೀತೆ? ಮತ್ತು ಅಂತಹ ತಂತ್ರಜ್ಞಾನ ಭಾರತಕ್ಕೆ ಎಂದು ಬಂದೀತೊ ಗೊತ್ತಿಲ್ಲ! ಆದ್ದರಿಂದ ಅಲ್ಲಿಯವರೆಗೆ, ಅಪರಕರ್ಮಗಳಲ್ಲಿ ನಂಬಿಕೆಯಿಲ್ಲದ ವಿಚಾರವಂತರು ತಮ್ಮ ದೇಹವನ್ನು ಸಾವಿನ ನಂತರ ಆಸ್ಪತ್ರೆಗಳಿಗೆ ಒಪ್ಪಿಸಿಬಿಡುವಂತಹ ಮರಣಪತ್ರವನ್ನು (ಉಯಿಲನ್ನು) ಬರೆದು ಆಸ್ಪತ್ರೆಗಳಲ್ಲಿ ನೋಂದಾಯಿಸುವುದು ಸೂಕ್ತ ಎನಿಸುತ್ತದೆ. ಅದರಿಂದ ವೈದ್ಯಕೀಯ ಶಿಕ್ಷಣ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ದೇಹದ ಅಂಗಾಂಗಗಳ ಅಧ್ಯಯನ ಸುಲಭಸಾಧ್ಯವಾದೀತು.