ಜಾತಿಗೊಂದು ಅಭಿವೃದ್ಧಿ ನಿಗಮ ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಆದರೆ ಜಮೀನುಗಳಲ್ಲಿ ಬಿಸಿಲು, ಮಳೆಯೆನ್ನದೆ, ಜೀವನ ನಿರ್ವಹಣೆಗಾಗಿ ಕೂಲಿ ಕೆಲಸ ಮಾಡುವ ಲಕ್ಷಾಂತರ ಗ್ರಾಮೀಣ ಕೂಲಿ ಕಾರ್ಮಿಕರನ್ನು ಹಿಂದಿನಿಂದಲೂ ಸರ್ಕಾರಗಳು ಕಡೆಗಣಿಸುತ್ತಲೇ ಬಂದಿವೆ. ಎಷ್ಟೋ ಮಹಿಳೆಯರು ಕೆಲಸಕ್ಕೆ ಸಮಯದ ನಿಗದಿ ಇಲ್ಲದಂತೆ ದುಡಿಯುತ್ತಿದ್ದರೂ ಸರ್ಕಾರದ ಸಹಾಯದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಗ್ರಾಮೀಣ ದಿನಗೂಲಿ ಕಾರ್ಮಿಕರ ಆರ್ಥಿಕಾಭಿವೃದ್ಧಿಗಾಗಿ ಅಖಂಡ ಕರ್ನಾಟಕ ಜಾತ್ಯತೀತ ಗ್ರಾಮೀಣ ಕೂಲಿ ಕಾರ್ಮಿಕರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ಸರ್ಕಾರ ಮುಂದಾಗಬೇಕು.