ರಾಜ್ಯ ತೀವ್ರ ಬರವನ್ನು ಎದುರಿಸುತ್ತಿದ್ದರೂ ನಮ್ಮ ಸರ್ಕಾರವು ಚುನಾವಣಾ ಮೈತ್ರಿ, ಒಳ ಒಪ್ಪಂದ, ಖಾತೆ ಹಂಚಿಕೆ, ಜಯಂತಿ ಆಚರಣೆ, ಮುಂದಿನ ವರ್ಷ ನಡೆಯಲಿರುವ ಲೋಕ ಸಭಾ ಚುನಾವಣೆಯ ಮಹಾ ಘಟಬಂಧನ... ಎಂಬೆಲ್ಲ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಂಡಿದೆಯೇ ಹೊರತು, ನಾಡಿನ ಅಭಿವೃದ್ಧಿಯ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಆದ್ದರಿಂದ ಹೊಸ ಸರ್ಕಾರದಿಂದ ಹೊಸದನ್ನು ನಿರೀಕ್ಷಿಸುತ್ತಿರುವವರಿಗೆ ಭ್ರಮ ನಿರಸನವಾಗುವುದರಲ್ಲಿ ಸಂಶಯವಿಲ್ಲ.