ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಧಾನಿ ಗಮನ ಸೆಳೆಯಬೇಕಿದೆ

Last Updated 3 ಜೂನ್ 2022, 19:30 IST
ಅಕ್ಷರ ಗಾತ್ರ

ಕದ್ದು ಸಾಗಣೆ ಮಾಡಿದ ಅತ್ಯಮೂಲ್ಯ ಕಲಾಕೃತಿಗಳನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮರಳಿ ಭಾರತಕ್ಕೆ ತಂದಿದೆ ಎಂದು ಬಿಜೆಪಿ ಮುಖಂಡ ಲಕ್ಷಣ ಸವದಿ ಟ್ವೀಟ್‌ ಮೂಲಕ ತಿಳಿಸಿದ್ದಾರೆ (ಪ್ರ.ವಾ., ಜೂನ್‌ 3). ಈ ವಿಷಯ ತಿಳಿದು ಬಹಳ ಸಂತೋಷವಾಯಿತು. ನಮ್ಮ ಭಾರತದ ಸಂಪತ್ತನ್ನು ಕೊಳ್ಳೆ ಹೊಡೆದು ವಿದೇಶಿ ಬ್ಯಾಂಕುಗಳಲ್ಲಿ ಅಡಗಿಸಿ ಇಟ್ಟಿರುವ ಕಪ್ಪುಹಣದ ವಿಚಾರ ಪ್ರಧಾನಮಂತ್ರಿ ಸಹಿತ ದೇಶದ ಎಲ್ಲ ನಾಗರಿಕರಿಗೂ ಗೊತ್ತಿದೆ.

ಪ್ರಧಾನಿ ಅವರು ನಮ್ಮ ದೇಶದ ಸಂಪತ್ತಾದ ಕಲಾಕೃತಿಗಳನ್ನು ಮರಳಿ ತಂದ ಮಾದರಿಯಲ್ಲಿ ಈ ಕಪ್ಪುಹಣವನ್ನೂ ತಂದರೆ ಜನ ಅವರಿಗೆ ಆಭಾರಿಯಾಗಿ ಇರುತ್ತಾರೆ. ಸವದಿ ಅವರು ಈ ಬಗ್ಗೆಯೂ ಟ್ವೀಟ್ ಮಾಡಿ ಪ್ರಧಾನಿ ಅವರ ಗಮನ ಸೆಳೆಯಬೇಕು.

- ಹುಸೇನಬಾಷಾ ತಳೇವಾಡ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT