ಕಾನೂನುಗಳು ಎಂದೂ ದೇಶ ಕೊಲ್ಲುವ ಕಾಯಿಲೆಗಳಾಗಬಾರದು. ರೈತರನ್ನು ಅಲಕ್ಷಿಸಿ ಏನು, ಮುಂದೆ ಸಿಮೆಂಟು ತಿನ್ನುವುದೇ? ರೈತನೆಂಬವ ಭೂಮಿ ಮೇಲಿನ ಬದುಕಿನ ಹೃದಯ ಇದ್ದಂತೆ. ಹೋಗಿ ಹೋಗಿ ರೈತಪ್ರಾಣವನ್ನೇ ಪಣಕ್ಕೊಡ್ಡುವುದೆಂದರೆ! ಈ ನೆಲದ ಎಲ್ಲವೂ- ಬದುಕು, ಸಂಸ್ಕೃತಿ ವೇದ ವೇದಾಂತ ಚಿಂತನೆ, ಸಾಹಿತ್ಯ, ಸಂಗೀತ, ನಾಟಕ ಮುಂತಾಗಿ ಸಕಲಾತಿ ಸಕಲವೂ ನಿಂತಿದ್ದರೆ ಆ ಎಲ್ಲದರ ಮೂಲದಲ್ಲಿ ರೈತ ಜೀವಂತ ಇದ್ದಾನೆ. ಆತ ಸೋತನೆಂದರೆ ಎಲ್ಲವೂ ಸಮಾಧಿಯಾಗುತ್ತವೆ. ಎಚ್ಚರಾಗಿ, ರೈತರ ಮಾತು ಕೇಳೋಣ. ಅದು ದೇವರ ಮಾತು. ಮರೆಯದಿರೋಣ.