ಕಾಂಗ್ರೆಸ್ ಪರಿವರ್ತನಾ ಯಾತ್ರೆ ಸಂದರ್ಭದಲ್ಲಿ ವಿಜಯಪುರದಲ್ಲಿ ಸಿದ್ದರಾಮಯ್ಯನವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ ಬಗೆ ಕೀಳು ಮಟ್ಟದ್ದಾಗಿತ್ತು. ಅವರು ಹೇಳಿದ ಮಾತುಗಳು ಹೀಗಿದ್ದವು: ‘ಸುಳ್ಳೇ ತನ್ನ ದೇವರೆಂದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಗುಜರಾತ್ನಲ್ಲಿ ಹುಟ್ಟಿದ್ದೇ ವಿಪರ್ಯಾಸ. ಅವರೊಬ್ಬ ಮಹಾನ್ ಸುಳ್ಳುಗಾರ ಅಂಬಾನಿ ಜತೆ ₹ 39,000 ಕೋಟಿ ಲೂಟಿ ಮಾಡಿದವರು. ಚೌಕಿದಾರ ಅಲ್ಲ, ನೀವು ಈ ದೇಶದ ಚೋರ್, ಭ್ರಷ್ಟಾಚಾರದ ಭಾಗಿದಾರ್’.