ಪುತ್ರರನ್ನು ತಮ್ಮ ಉತ್ತರಾಧಿಕಾರಿಗಳೆಂಬಂತೆ ಬಿಂಬಿಸುವ ಪರಿಪಾಟ ಎಗ್ಗಿಲ್ಲದೆ ಸಾಗಿದೆ. ಜೊತೆಗೆ ರಕ್ತಸಂಬಂಧಿಗಳು ಮತ್ತು ಆಪ್ತೇಷ್ಟರಿಗೆ ಆದ್ಯತೆ ನೀಡುತ್ತಿರುವುದು ಎದ್ದು ಕಾಣಿಸುತ್ತದೆ. ಇದು ರಾಜ್ಯಪ್ರಭುತ್ವವಲ್ಲ, ಪ್ರಜಾಪ್ರಭುತ್ವ. ದ್ರೋಣಾಚಾರ್ಯರಂತಹ ಮಹಾನುಭಾವರಿಗೂ ಆಪತ್ತು ತಂದದ್ದು ಪುತ್ರ ವ್ಯಾಮೋಹ ಎಂಬುದನ್ನು ಮರೆಯಬಾರದು.