ಜಟಿಲ ಸಮಸ್ಯೆಗಳಿಗೆ ಪರಿಹಾರ ಹುಡುಕಿ, ಜನಸಾಮಾನ್ಯರಿಗೆ ಹಿತವೆನಿಸುವಂಥ ಸಾಮಾನ್ಯ ಕಾರ್ಯಕ್ರಮಗಳನ್ನು ರೂಪಿಸಿ ಶಾಸಕರೊಂದಿಗೆ, ವಿರೋಧ ಪಕ್ಷಗಳೊಂದಿಗೆ ಸಹಮತ ಹಾಗೂ ಸಮನ್ವಯದಿಂದ ಅವರು ಆಡಳಿತ ನಡೆಸಬೇಕು. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಇರುವುದರ ಪೂರ್ಣ ಪ್ರಯೋಜನ ಪಡೆದು, ರಾಜ್ಯದ ಎಲ್ಲ ಭಾಗಗಳನ್ನೂ ಅಭಿವೃದ್ಧಿಪಡಿಸಬೇಕು. ವಿರೋಧ ಪಕ್ಷಗಳು ವಿಷಯಾಧಾರಿತವಾಗಿಯಾದರೂ ಸಹಕಾರ ನೀಡಬೇಕು. ಆಡಳಿತದಲ್ಲಿ ಮೌಲ್ಯಾಧಾರಿತ ನಿರ್ಧಾರಗಳನ್ನು ತೆಗೆದುಕೊಂಡು ಜಾರಿಗೆ ತಂದರೆ, ಜನಸಾಮಾನ್ಯರ ಜೀವನಮಟ್ಟ ಸುಧಾರಣೆಯಾಗಿ, ರಾಜಕೀಯ ಪಕ್ಷಗಳ ಬಗ್ಗೆ ಅವರಲ್ಲಿ ಒಳ್ಳೆಯ ಅಭಿಪ್ರಾಯ ಮೂಡುತ್ತದೆ.